Headlines

ಬಳ್ಳಾರಿ : ಪ್ರೀತಿ ಹೆಸರಲ್ಲಿ ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿದ ಲೆಕ್ಚರ್.!ಈಗ ಪೊಲೀಸರಿ ಅಥಿತಿ.!

ಅಶ್ವಸೂರ್ಯ/ಬಳ್ಳಾರಿ : ಬಳ್ಳಾರಿಯ ಖಾಸಗಿ ಕಾಲೇಜಿನ ಉಪನ್ಯಾಸಕ ರವಿಕಿರಣ್, ತನ್ನ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದ್ದಾನೆ. ತಾನು ವಿವಾಹಿತನೆಂಬ ಸತ್ಯ ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
ವಿದ್ಯಾ ದೇಗುಲದಲ್ಲಿ ಪಾಠ ಹೇಳಿಕೊಡಬೇಕಾದ ಗುರುವೊಬ್ಬ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಯ ಜಾಲಕ್ಕೆ ಬೀಳಿಸಿಕೊಂಡು ನಂಬಿಕೆ ದ್ರೋಹ ಎಸಗಿದ ಘಟನೆ ಗಣಿ ನಾಡು ಬಳ್ಳಾರಿಯಲ್ಲಿ ಸಂಚಲನ ಮೂಡಿಸಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸುಮ್ಮನಿರದ ಈ ನೀಚ ಕಾಮುಕ ಉಪನ್ಯಾಸಕ, ತನ್ನ ಶಿಷ್ಯೆಯನ್ನೇ ದೈಹಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ಸಸ್ಯಶಾಸ್ತ್ರ (Botany) ವಿಭಾಗದ ಉಪನ್ಯಾಸಕ 45 ವರ್ಷದ ರವಿಕಿರಣ್ ಬಂಧಿತ ಆರೋಪಿ. ಈತ ಕಾಲೇಜಿನಲ್ಲಿ ಸಭ್ಯನಂತೆ ನಟಿಸುತ್ತಾ ವಿದ್ಯಾರ್ಥಿನಿಯರ ಮೇಲೆ ಕಣ್ಣು ಹಾಕಿದ್ದ ಎನ್ನಲಾಗಿದೆ. 2025ರಲ್ಲಿ ಈತ ಮತ್ತು ಪಿಯುಸಿ ವಿದ್ಯಾರ್ಥಿನಿಯ ನಡುವೆ ಸ್ನೇಹ ಆರಂಭವಾಗಿತ್ತು. ಈ ಸ್ನೇಹವನ್ನೇ ಬಂಡವಾಳ ಮಾಡಿಕೊಂಡ ರವಿಕಿರಣ್, ತಾನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಪ್ರೇಮಪಾಶಕ್ಕೆ ಸಿಲುಕಿಸಿಕೊಂಡಿದ್ದಾನೆ.
ಸಂತ್ರಸ್ತ ವಿದ್ಯಾರ್ಥಿನಿಯ ದೂರಿನ ಪ್ರಕಾರ, 2026ರ ಹೊತ್ತಿಗೆ ಇವರ ಸ್ನೇಹ ಗಾಢವಾಗಿತ್ತು. ಮದುವೆಯಾಗುತ್ತೇನೆ ಎಂದು ಪದೇ ಪದೇ ಆಕೆಗೆ ನಂಬಿಕೆ ದ್ರೋಹ ಎಸಗಿದ ರವಿಕಿರಣ್, ವಿದ್ಯಾರ್ಥಿನಿಯ ವಿರೋಧವಿದ್ದರೂ ಸಹ ಪದೇ ಪದೇ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ತನಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದನ್ನು ಮುಚ್ಚಿಟ್ಟು ಅಥವಾ ಗೊತ್ತಿದ್ದರೂ ಸಹ ಮದುವೆಯಾಗುವೆ ಎಂಬ ಆಸೆ ತೋರಿಸಿ ಈ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!