

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಬ್ಯಾಟ್ ನರಸಿಂಹನ ಹತ್ಯೆಯಾದ ಸ್ಥಳಕ್ಕೆ ಇಂದು ಮುಂಜಾನೆ ಆರೋಪಿಗಳನ್ನುವ ಪೊಲೀಸರು ಪಂಚನಾಮೆ ಮಾಡಲು ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧು ಕಾಲಿಗೆ ಪೊಲೀಸರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗುಂಡು ತೂರಿಸಿದ್ದಾರೆ.
ಹತ್ಯೆಯಾದ ಬ್ಯಾಟ್ ನರಸಿಂಹ.

ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್ನಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ರೌಡಿಶೀಟರ್ (Rowdy Sheetar) ನರಸಿಂಹ ಕೊಲೆ ಕೇಸ್ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ಮಾಡಿದ್ದಾನೆ. ಸಿಪಿಐ ಹರೀಶ್ ಪಟೇಲ್ ಏರ್ ಫೈರ್ ಮಾಡಿ ವಾರ್ನ್ ಮಾಡಿದರೂ ಆತ ಜಗ್ಗದ ಹಿನ್ನೆಲೆಯಲ್ಲಿ ಕೋಟೆ ಠಾಣೆ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ತಮ್ಮ ಬಳಿ ಇದ್ದ ಸರ್ವಿಸ್ ರಿವಲ್ವಾರ್ ನಿಂದ ಆರೋಪಿ ಮಧು ಕಾಲಿಗೆ ಫೈರ್ ಮಾಡಿದ್ದಾರೆ. ಗುಂಡು ಆರೋಪಿ ಮಧು ಕಾಲನ್ನು ಸೀಳುತ್ತಿದ್ದಂತೆ ಅಲ್ಲೆ ಕುಸಿದು ಬಿದ್ದಿದ್ದಾನೆ ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು
ಗಾಯಾಳು ಮಧು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಯಾವುದೇ ಪ್ರಾಣ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದು. ಎಸ್ಪಿ ಬಿ. ನಿಖಿಲ್ ಐಪಿಎಸ್ ಆವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಫೈರಿಂಗ್ ಸಂಭವಿಸಿದಂತೆ ದೂರು ದಾಖಲಾಗಿದೆ.
ಪ್ರಕರಣದ ಹಿನ್ನೆಲೆ :
ಆರೋಪಿ ಮಧು

ಶಿವಮೊಗ್ಗದ ಗಾಂಧಿ ಬಜಾರ್ನ 1ನೇ ಕ್ರಾಸ್ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್, ಇಸ್ಪಿಟ್ ಗ್ಯಾಂಬ್ಲರ್ ಬ್ಯಾಟ್ ನರಸಿಂಹ ಬರ್ಬರವಾಗಿ ಹತ್ಯೆಯಾಗಿದ್ದ.! ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಯಾದ ರೌಡಿಶೀಟರ್ ನರಸಿಂಹನನ್ನು ಎದುರಾಳಿ ಅಂಬು & ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.ಈ ಕೊಲೆ ಪ್ರಕರಣದ ಸಂಬಂಧ ಶನಿವಾರ ಕೋಟೆ ಠಾಣೆ ಪೊಲೀಸರು ಮಧು ಸೇರಿದಂತೆ ಐವರನ್ನು ಬಂಧಿಸಿದ್ದರು.

