
ಭದ್ರಾವತಿ : ಶಿವಮೊಗ್ಗ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ಪುಡಿ ರೌಡಿಗಳ ಅಟ್ಯಾಕ್.! ಆಸ್ಪತ್ರೆಗೆ ದಾಖಲು.
news.ashwasurya.in
ಅಶ್ವಸೂರ್ಯ/ಭದ್ರಾವತಿ : ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ(34) ಎಂಬಾತನ ಮೇಲೆ ಆರೇಳು ಮಂದಿ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ ಹತ್ತಿರ ಇಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.
ವಿಶ್ವನಾಥ್ ಭದ್ರಾವತಿಯ ಸೀಗೆಬಾಗಿ ಬಳಿಯ ಟೀ ಶಾಪ್ನಲ್ಲಿ ಟೀ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದು ಅಟ್ಯಾಕ್ ಮಾಡಿದ ಆರೇಳು ಮಂದಿ ಯುವಕರ ಗ್ಯಾಂಗ್ ಮೊದಲು ವಿಶ್ವನ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ. ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವಿಶ್ವನಾಥ್ ತಿರುಗಿ ನೋಡುವಾಗ ಅಡ್ಡ ಬಂದ ಎಡಗೈ ತುಂಡಾಗಿದೆ. ನಂತರ ಗುಂಪು ಮನಸೋ ಇಚ್ಛೆ ದಾಳಿ ನಡೆಸಿದ್ದರಿಂದ ರೌಡಿಶೀಟರ್ ವಿಶ್ವನ ಎಡಗಾಲು ಕೂಡಾ ತುಂಡಾಗಿದೆ. ತೀವ್ರ ರಕ್ತಸ್ರಾವದಿಂದ ವಿಶ್ವನಾಥ್ ಕುಸಿದು ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳ ಗುಂಪು ಸ್ಥಳದಿಂದ ಎಸ್ಕೇಪ್ ಆಗುದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್ನನ್ನು ಸ್ಥಳೀಯರು ತಕ್ಷಣವೇ ಆಟೋದಲ್ಲಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸದ್ಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಭದ್ರಾವತಿಯಲ್ಲಿ ಇಸ್ಪೀಟ್ ಆಟದ ವಿಚಾರದಲ್ಲಿ ವಿಶ್ವನಾಥ್ಗೆ ಜೋಯಲ್ ಎಂಬವನೊಂದಿಗೆ ಜಗಳವಾಗಿತ್ತು. ಅಲ್ಲದೆ ಇತರರೊಂದಿಗೂ ಗಲಾಟೆ ಮಾಡಿಕೊಂಡಿದ್ದ. ಈತ ಕಳೆದ ಎರಡ್ಮೂರು ತಿಂಗಳಿನಿಂದ ಗಲಾಟೆಗಳನ್ನು ಬಿಟ್ಟು ಎಮ್ಮೆ ವ್ಯಾಪಾರ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ವಿಶ್ವನಾಥ್ ಪ್ರತಿ ಸೋಮವಾರ ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ನಂಜುಡೇಶ್ವರನ ದರ್ಶನಕ್ಕೆ ಹೋಗುತ್ತಿದ್ದ. ಇಂದು ದೇವಾಲಯಕ್ಕೆ ಹೋಗಿಲ್ಲ. ಭದ್ರಾವತಿಯಿಂದ ನಾಗತಿಬೆಳಗಲು ಸಾಗುವ ಮಾರ್ಗದಲ್ಲಿ ಸ್ಕೆಚ್ ಹಾಕಿದ್ದವರಿಗೆ ವಿಶ್ವನಾಥ್ ಸಿಕ್ಕಿಲ್ಲ. ಎಮ್ಮೆ ವ್ಯಾಪಾರ ಮಾಡಿಕೊಂಡಿದ್ದ ವಿಶ್ವನಾಥ್ಗೆ ಯುವಕನೋರ್ವ ಫೋನ್ ಮಾಡಿ ತಮಗೆ ಎಮ್ಮೆ ಬೇಕು, ಹೊಸ ಎಮ್ಮೆ ಕೊಡಿಸಿ ಎಂದು ಹೇಳಿದ್ದಾನೆ. ಅಲ್ಲದೆ ಕಡದಕಟ್ಟೆ ಗ್ರಾಮದ ಬಳಿ ಬರಲು ಕರೆದಿದ್ದಾನೆ. ಆದರೆ ವಿಶ್ವನಾಥ್ ತಾನು ಸೀಗೆಬಾಗಿ ಬಳಿ ಇರುವುದಾಗಿ ತಿಳಿಸಿದಾಗ ಗುಂಪು ಅಲ್ಲಿಗೆ ಬಂದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲಿಸರು ಭಲೇ ಬಿಸಿದ್ದಾರೆ.

ವಿಶ್ವನಾಥ್ ತಂದೆ ಮೃತ್ಯುಂಜಯ ಮಾತನಾಡಿ, “ನನ್ನ ಮಗನಿಗೆ ಹೊಡೆದಿದ್ದಾರೆಂದು ಓರ್ವ ಅಜ್ಜಿ ಬಂದು ನಮಗೆ ತಿಳಿಸಿದ್ರು. ನಾನು ಹೋಗಿ ನೋಡುವಷ್ಟರಲ್ಲಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆತ ಪ್ರತಿ ಸೋಮವಾರ ನಾಗತಿ ಬೆಳಗಲು ಗ್ರಾಮಕ್ಕೆ ಹೋಗುತ್ತಿದ್ದ. ದಾರಿಯಲ್ಲೇ ಹೊಡೆದಿದ್ದಾರೆ. ಕೆಂಪು ಕಾರಿನಲ್ಲಿ ಬಂದ ಆರೇಳು ಮಂದಿಯ ಗ್ಯಾಂಗ್ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ” ಎಂದರು.
ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಮಾತನಾಡಿ, “ವಿಶ್ವನಾಥ್ ಮೇಲೆ ಜೆಡಿಎಸ್ನವರು ಹಲ್ಲೆ ಮಾಡಿದ್ದಾರೆ. ವಿಶ್ವನಾಥ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಕಾಂಗ್ರೆಸ್ ಕಾರ್ಯಕರ್ತನ ಮೇಲೆ ನಡೆದಿರುವ ಈ ಹಲ್ಲೆ ಅತ್ಯಂತ ಖಂಡನೀಯ. ಕೃತ್ಯದ ಹಿಂದೆ ಜೆಡಿಎಸ್ ಪಕ್ಷದ ಕೆಲವು ಕಾರ್ಯಕರ್ತರ ಕೈವಾಡವಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಇದನ್ನು ಪೊಲೀಸರು ಪತ್ತೆ ಮಾಡುತ್ತಾರೆ. ಗೃಹ ಸಚಿವರ ಗಮನಕ್ಕೂ ತಂದು ಸಿಐಡಿ ತನಿಖೆ ನಡೆಸಲು ಮನವಿ ಮಾಡುತ್ತೇವೆ” ಎಂದರು.
“ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ. ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ. ಇದನ್ನು ಸಹಿಸದ ಜೆಡಿಎಸ್ ಗೂಂಡಾಗಳು ಹೀಗೆ ಹಲ್ಲೆ ಮಾಡಿಸಿದ್ದಾರೆ. ಆತನನ್ನು ನೋಡಿಕೊಂಡು ಬಂದಿದ್ದೇನೆ, ಎರಡು ಕೈ, ಒಂದು ಕಾಲು ಕಟ್ ಆಗಿದೆ. ತಲೆಗೆ ಸ್ವಲ್ಪ ಗಾಯವಾಗಿದೆ. ಆಸ್ಪತ್ರೆಯ ಖರ್ಚನ್ನು ನಾನೇ ಭರಿಸುವುದಾಗಿ ಕುಟುಂಬಕ್ಕೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಪೋಲಿಸರು ಆರೋಪಿಗಳ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.


