
ಜಾರ್ಖಂಡ್ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ತಬ್ಬಿಬ್ಬು.! ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಲಯ.!!

news.ashwasurya.in
ಅಶ್ವಸೂರ್ಯ/ರಾಂಚಿ : ವಶಪಡಿಸಿಕೊಂಡಿದ್ದ 200 ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್,ವಿಚಾರಣೆ ವೇಳೆ ಪೊಲೀಸರ ಒಂದೇ ವಾಕ್ಯದ ಉತ್ತರಿಂದ ಇಡೀ ಪ್ರಕರಣವೇ ಬಿದ್ದು ಹೋಗಿದೆ. ಆರೋಪಿಗಳು ಖುಲಾಸೆಗೊಂಡಿದ್ದಾರೆ. ಅಷ್ಟಕ್ಕೂ ಪೊಲೀಸ್ ಉತ್ತರವೇನು ಅ ಉತ್ತರವಾದರು ಎನು.?
ರಾಂಚಿಯ ಪೊಲೀಸರ ತಂಡ ವಾಹನವೊಂದನ್ನು ತಡೆದು ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಬರೋಬ್ಬರಿ 200 ಕೆಜಿ ಗಾಂಜಾ ಸಿಕ್ಕಿ ಅದನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಇದರ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿಗೂ ಮಿಗಿಲು.! ಈ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಆರೋಪಿಗಳು, ಪೊಲೀಸರು ಕೋರ್ಟ್ಗೆ ಹಾಜರಾಗಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶರು, ಆರೋಪಿಗಳ ವಾಹನದಿಂದ ವಶಪಡಿಸಿಕೊಂಡ ಗಾಂಜಾ ಎಲ್ಲಿ ಎಂದು ಪೊಲೀಸರನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಪೊಲೀಸ್ ನೀಡಿದ ಉತ್ತರಕ್ಕೆ ನ್ಯಾಯಾಧೀಶರೆ ದಿಗ್ಭ್ರಮೆಯಾಗಿದ್ದಾರೆ . ಇಷ್ಟೇ ಅಲ್ಲ ಈ ಉತ್ತರದಿಂದ ದೊಡ್ಡ ಪ್ರಮಾಣದ ಗಾಂಜಾ ಪ್ರಕರಣವೆ ಅಂತ್ಯಗೊಂಡು ಆರೋಪಿಗಳು ಖುಲಾಸೆಗೊಂಡ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.! ಹಳ್ಳ ಹಿಡಿದ ತನಿಖೆ
2022ರಲ್ಲಿ ಓರ್ಮಾಂಜಿ ಠಾಣಾ ವ್ಯಾಪ್ತಿಯ ಪೊಲೀಸರು ಮಾಹಿತಿ ಆಧರಿಸಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೂವರು ಪ್ರಯಾಣಿಸುತ್ತಿದ್ದ ಬಿಳಿ ಬೊಲೆರೋ ವಾಹನದಲ್ಲಿ ಬರೋಬ್ಬರಿ 200 ಕೆಜಿ ಗಾಂಜಾ ಪತ್ತೆಯಾಗಿತ್ತು. ಆದರೆ ತಾಪಸಣೆ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದರು. ಒಂದು ತಿಂಗಳ ಬಳಿಕ ಓರ್ವ ಆರೋಪಿಯನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿತ್ತು. ಇತ್ತ ವಾಹನ ಹಾಗೂ ಗಾಂಜಾ ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.

ನ್ಯಾಯಲಯದಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಪೊಲೀಸಪ್ಪನ ಉತ್ತರವೇನು.?
ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಶುರುವಾಗಿದೆ. ಆರೋಪಿಯ ಹೇಳಿಕೆ, ಸಿಕ್ಕಿರುವ ಸಾಕ್ಷ್ಯಗಳು ಎಲ್ಲಾ ತದ್ವಿರುದ್ದವಾಗಿತ್ತು. ಆರೋಪಿ ಹಾಗೂ ಪೊಲೀಸರನ್ನು ಕೋರ್ಟ್ ವಿಚಾರಣೆಗಾಗಿ ಕೋರ್ಟ್ ಹಾಜರಿಗೆ ಸೂಚಿಸಿತ್ತು. ಇದರಂತೆ ಕೋರ್ಟ್ ಎಲ್ಲರೂ ಆಗಮಿಸಿದ್ದರು.ವಿಚಾರಣೆ ವೇಳೆ ಹೇಳಿಕೆಗೆ ತಾಳೆಯಾಗುತ್ತಿಲ್ಲ, ಸಾಕ್ಷ್ಯಗಳು ಲಭ್ಯವಿಲ್ಲ. ಹಲವು ಗೊಂದಲಗಳಿಂದ ಕೂಡಿತ್ತು. ಹೀಗಾಗಿ ವಶಪಡಿಸಿಕೊಂಡಿರುವ ಗಾಂಜಾ ಎಲ್ಲಿ ಎಂದು ನ್ಯಾಯಾಧೀಶರು ಕೇಳಿದ್ದಾರೆ.? ವಶಪಡಿಸಿಕೊಂಡಿದ್ದ 200 ಕೆಜಿ ಗಾಂಜಾವನ್ನು ಇಲಿಗಳು ತಿಂದಿದೆ ಎಂದು ಪೊಲೀಸರು ಉತ್ತರಿಸಿದ್ದಾರೆ.! ಪೊಲೀಸರ ಹೇಳಿಕೆ ಕೇಳಿದ ನ್ಯಾಯಾಧೀಶರು ಮತ್ತು ಅಲ್ಲಿದ್ದ ವಕೀಲರು ಮತ್ತು ಕೇಲವರು ಗಾಬರಿಯಾಗಿದ್ದಾರೆ ಜೋತೆಗೆ ಆಶ್ಚರ್ಯವು ಆಗಿದೆ.!
ಆರೋಪಿಗಳ ಖುಲಾಸೆಗೊಳಿಸಿದ ಕೋರ್ಟ್.
ಪೊಲೀಸ್ ಉತ್ತರಕ್ಕೆ ನ್ಯಾಯಾಲಯಕ್ಕೆ ದಿಗ್ಭ್ರಮೆಯಾಗಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಗಾಂಜಾ ಇಲ್ಲ ಎಂದರೆ ಹೇಗೆ. ಪ್ರತಿ ಅಪರಾಧ ಪ್ರಕರಣಗಳಲ್ಲಿ ಘಟನೆಗೆ ಬಳಸಿಕೊಂಡಿರುವ, ಘಟನೆಯ ಪ್ರಮುಖ ವಸ್ತುಗಳು ಪ್ರಧಾನ. ಈ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಅದನ್ನು ಸಾಕ್ಷಿಯಾಗಿ, ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಆದರೆ ವಶಪಡಿಸಿಕೊಂಡ ಗಾಂಜ ಇಲಿ ತಿಂದಿದೆ ಎಂದರೆ, ಈ ಪ್ರಕರಣದ ಪ್ರಮುಖ ಸಾಕ್ಷಯೆ ( ದಸ್ತಗಿರಿ ಮಾಡಿದ್ದ 200 ಕೆಜಿ ಗಾಂಜಾ ) ಲಭ್ಯವಿಲ್ಲ. ಹೀಗಾಗಿ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತು. ಆರೋಪಿಗಳನ್ನು ಖುಲಾಸೆಗೊಳಿಸಿತು.


